ಪುಣೆ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಸಶಸ್ತ್ರ ಪಡೆಗಳ ನಡುವೆ ಕಾರ್ಯವಿಧಾನದ ಮಾಹಿತಿ ಹಂಚಿಕೆ ಸೇರಿದಂತೆ ಉನ್ನತ ಮಟ್ಟದ ಸಮನ್ವಯತೆಯ ಅಗತ್ಯವಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಹೇಳಿದ್ದಾರೆ.
ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಇನ್ನೂ ನಡೆಯುತ್ತಿದೆ. ಅದು ಮುಗಿದಿಲ್ಲ. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಸಜ್ಜಾಗುವುದು ಉತ್ತಮ ಎಂದಿದ್ದಾರೆ.
ಮೂರು ಪಡೆಗಳ ನಡುವೆ ವಾಯು ರಕ್ಷಣೆಯನ್ನು ಸಂಯೋಜಿಸಲಾಗಿದೆ. ಅದನ್ನು ಆಪರೇಷನ್ ಸಿಂಧೂರ ಸಮಯದಲ್ಲಿಯೂ ಮಾಡಲಾಗಿತ್ತು. ಶತ್ರು ರಾಷ್ಟ್ರದಿಂದ ಯಾವುದೇ ದಾಳಿ ಎದುರಾದರೂ ಅದನ್ನು ಸಮರ್ಥ ರೀತಿಯಲ್ಲಿ ಎದುರಿಸಲು ನೌಕಾಪಡೆಯು ಸಂಪೂರ್ಣವಾಗಿ ಸಜ್ಜಾಗಿದೆ ಎಂದರು.

0 Comments
Await For Moderation ; Normally we don't allow Comments